Wednesday, October 22, 2008

ಹಳ್ಳಿಗಳು ಖಾಲಿಯಾಗುತ್ತಿವೆ.

ಮೇಲಿನ ತಲೆಬರಹದಲ್ಲಿ ೧೯-೧೦-೨೦೦೮ ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ನರೇಂದ್ರ ರೈ ದೇರ್ಲ ಬರೆದಿರುವ ಲೇಖನ ಉತ್ತಮವಿಚಾರಗಳನ್ನು ತೆರೆದಿಟ್ಟಿದೆ. ನಗರ ವ್ಯಾಮೋಹ ಎಲ್ಲಿಯವರೆಗೆ ನಮ್ಮನ್ನು ಬಿದುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹಳ್ಳಿಗಳು ಖಾಲಿಯಾಗುತ್ತಲೇ ಇರುತ್ತವೆ. ಒಂದು ಹಂತದಲ್ಲಿ ನಾವೆಲ್ಲ ಮೇಲೆ ನೋಡ ಬೇಕಾದ ಪರಿಸ್ಥಿತಿ ಬರಬಹುದು. ಹಾಗಾದರೆ ಅದನ್ನು ನಿಲ್ಲಿಸುವ ದಾರಿ ಯಾವುದು? ಯಾವುದೇ ಸರಕಾರ ರೈತರಿಗಾಗಿ ವಿವಿಧ ಪ್ಯಾಕೇಜು ಘೋಷಿಸುವಾಗ ಕೆಲವೊಂದು ವಿಚಾರಗಳನ್ನು ಗಮನಿಸ ಬೇಕಾಗಿವೆ. ಯಾವತ್ತು ರೈತನ ಕೆಲಸ ಬಹಳ ಮುಖ್ಯ ಎನ್ನುವ ವಿಚಾರ ನಮ್ಮ ಯುವಜನರಿಗೆ ಬರುವಹಾಗೆ ಮಾಡಿದ್ದಾರೆಯೇ? ಕೃಷಿ ಕ್ಷೇತ್ರದಲ್ಲಿ ಯುವಕರನ್ನು ಆಕರ್ಷಿಸಲು ಸರಕಾರದಲ್ಲಿ ಅಥವಾ ಚಿಂತಕರಲ್ಲಿ ಏನಾದರು ವಿಶೇಷ ದಾರಿಗಳಿವೆಯೇ? ಅಥವಾ ಕನಿಷ್ಠ ಉತ್ತಮ ಯುವ ಕೃಷಿಕ ಎನ್ನುವ ಪ್ರಶಸ್ತಿ ಕೊಡುತ್ತಾರೆಯೇ? ಕೃಷಿಕರ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತಿದೆಯೇ? ಇನ್ನಾದರು ಇದೊಂದು ಗಂಭೀರ ಪ್ರಶ್ನೆ ಎನ್ನುವ ಮನೋಭಾವ ನಮ್ಮ ಆಡಳಿತ ಪ್ರತಿನಿಧಿಗಳಿಗೆ ಬರಬಹುದೇ?

No comments: