Sunday, October 19, 2008

ಕಾಸರಗೋಡು ಸುದ್ದಿಗಳು

ಕನ್ನಡಿಗರ ಹೋರಾಟ : ಕಾಸರಗೋಡು ಪ್ರದೇಶದಲ್ಲಿ ಕನ್ನಡ ಭಾಷೆಯ ಮೇಲೆ ವ್ಯಾಪಕ ಮಲತಾಯಿ ಧೋರಣೆ ಆಗುತ್ತಿರುವುದರ ಕುರಿತು ಕಾಸರಗೋಡು ಕನ್ನಡಿಗರು ಕಣ್ಣೀರು ಮಿಡಿಯುತ್ತಿದಾರೆ. ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಚಟುವಟಿಕೆಗಳನ್ನು ಸಹಿಸದ ಕೆಲವು ಮಂದಿ ಸೂಚನಾ ಫಲಕವನ್ನು ಹರಿಯುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಯುವಕರೇ ನಾವೇನು ಮಾಡಬಹುದು

ಪ್ರಪಂಚ ವಿಶಾಲವಾಗಿದೆ. ಜಾಗತೀಕರಣದ ಮಧ್ಯೆಯೂ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಈ ಸಮಸ್ಯೆ ಯನ್ನು ಪರಿಹರಿಸಲು ಯುವಕರಾದ ನಾವು ಬಹಳಷ್ಟು ಪ್ರಯತ್ನಿಸಬೇಕಾಗಿದೆ. ಈಗ ಯಾರಿಗೂ ಅರಿವಿನ ಕೊರತೆ ಇಲ್ಲ. ಆದರೆ ನಾವೇನು ಮಾಡುತ್ತಿದ್ದೇವೆ ಎನ್ನುವ ವಿವೇಕ ನಮಲ್ಲಿ ಇಲ್ಲ. ಆದುದರಿಂದ ಪ್ರಪಂಚ ಬೆಳೆಯುತ್ತಿರುವಂತೆ ನಾವ್ಯಾಕೆ ಹಿಂದೆ ಚಲಿಸುತ್ತಿದ್ದೇವೆ
ಎಂದು ಅರ್ಥವಾಗುತ್ತಿಲ್ಲ. ಇದನ್ನು ಪರಿಹರಿಸಲು ಯುವಕರಿಂದ ಮಾತ್ರ ಸಾಧ್ಯ. ನಾವೇನಾದರೂ ಈಗ ಪ್ರಯತ್ನ ಮಾಡದಿದ್ದರೆ ಮುಂದೆ ನಾವೇ ದುರಂತವನ್ನು ನಮ್ಮ ಮೇಲೆಯೇ ಎಳೆದುಹಾಕಿದಂತೆ . ಈ ಸಮಸ್ಯೆ ಭೀಕರವಾಗುವ ಮೊದಲು ನಾವೇನು ಮಾಡಬಹುದು?ಪ್ರತಿಯೊಬ್ಬರೂ ನಮ್ಮ ಪರಿಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಾಗಿದೆ. ತನ್ನ ಹಿನ್ನೆಲೆಯನ್ನು ಅರಿಯಬೇಕಾಗಿದೆ. ಹೀಗಾದರೆ ಮಾತ್ರ ನಾವೇನಾದರೂ ಈ ಸಮಾಜಕ್ಕೆ ಕೊಡುಗೆಯನ್ನು ಕೊಡಬಹುದಾಗಿದೆ. ಈ ಸುಂದರವಾದ ಭೂಮಿಯಲ್ಲಿ ನಾವು ಹುಟ್ಟಿ ನಮ್ಮ ದೇನಾದರು ಕೊಡುಗೆಯನ್ನು ಕೊಡದಿದ್ದರೆ ನಮ್ಮ ಜೀವನವೇ ಶೂನ್ಯವಾಗಬಹುದು. ನಮಗೀಗ ಬೇಕಾಗಿರುವುದು ಏನು? ಯಾವುದರ ಕೊರತೆಯಿಂದ ನಮಗೆ ಈಗ ಗೊಂದಲವಾಗಿದೆ. ಈ ಗೊಂದಲಕ್ಕೆ ಪರಿಹಾರವೇನು? ಅಭಿಪ್ರಾಯ ತಿಳಿಸುತ್ತಿರಾ?

ರಾಜೇಶ್ ಬೆಜ್ಜಂಗಳ