Sunday, February 8, 2009

ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ಬರವಣಿಗೆ
ಶೈಕ್ಷಣಿಕ ರೀತಿ ಬದಲಾಗುತ್ತಿದೆ. ಓದುವ ಹವ್ಯಾಸ ಕಡಿಮೆಯಗುತ್ತಿರುವಂತೆ ಬರವಣಿಗೆಯೂ ಅವರಿಂದ ದೂರ ಹೋಗುತ್ತಿದೆ.ಈಗಿನ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಇದು ಬಹಳ ಅನಿವಾರ್ಯ ವಾಗಿ ಬೇಕಾಗಿದೆ. ಆದರೆ ಈ ಕುರಿತು ಯೋಚನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವುದು ಕಡಿಮೆ. ಯಾಕೆಂದರೆ ಇದೆಲ್ಲ ನಮ್ಮ ಮುಂದಿನ ಜೀವನಕ್ಕೆ ಅಗತ್ಯವಿಲ್ಲವೆನ್ನುವ ಅಭಿಪ್ರಾಯ ಅವರದ್ದು. ಆದರೆ ಕೆಳ ತರಗತಿಯಲ್ಲಿ ಯಾವುದಾದರು ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಇದ್ದು ಅದನ್ನು ಬೆಳೆಸಿಕೊಂಡು ಬಂದವರು ಮುಂದಿನ ತರಗತಿಗಳಲ್ಲಿ ಉತ್ತಮ ರೀತಿಯಲ್ಲಿ ಸಹಕರಿಸುತ್ತಾರೆ, ತಮ್ಮ ಆಸಕ್ತಿಯನ್ನು ಮತ್ತು ಬೆಳಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾದರೆ ಅವರ ಜೀವನ ಸುಗಮವಾಗುವುದಲ್ಲದೆ ವಿದ್ಯಾಲಯ ಮತ್ತು ಮನೆಯಲ್ಲಿ ಜತೆಗೆ ಮುಂದೆ ತಾವು ಯಾವುದೋ ಕೆಲಸಕ್ಕೆ ಸೇರಿದ ಸ್ಥಳದಲ್ಲಿ ಒಳ್ಳೆಯ ರೀತಿಯಿಂದ ಇರಲು ಪ್ರಯತ್ನಿಸುತ್ತಾರೆ. ತಮ್ಮ ಮನಸಿನ ಭಾವನೆಗಳನ್ನು ಪ್ರಕಟಿಸಲು ಬರವಣಿಗೆಯನ್ನಾದರೂ ದಾರಿಯನ್ನಾಗಿ ಮಾಡಿಕೊಂಡರೆ ಎಲ್ಲೆಲ್ಲೊ ತಿರುಗುವ ಮಾನಸಿಕ ತುಮುಲಗಳನ್ನು ಸರಿಪಡಿಸಬಹುದು.

Saturday, January 31, 2009


ಇಂಡಸ್ ಕಾಲೇಜಿನಲ್ಲಿ ಚುಟುಕು ಕಾರ್ಯಾಗಾರ

ಕನ್ನಡ ಸಂಘ , ರಾಷ್ಟ್ರೀಯ ಸೇವಾ ಯೋಜನೆ ಇಂಡಸ್ ಕಾಲೇಜು ಮತ್ತು ಪುತ್ತೂರು ತಾಲೂಕು ಚುಕ್ತುಕು ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗೆ ಒಂದು ದಿನದ ಚುಟುಕು ಕಾರ್ಯಾಗಾರ ಇಂಡಸ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚುಟುಕ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಶ್ರೀ ವಿ ಬಿ ಅರ್ತಿಕಜೆಯವರು ಉಧ್ಘಾಟಿಸಿದರು . ಅವರು ಮಾತನಾಡುತ್ತ ಚುಟುಕು ನಮ್ಮ ಬದುಕಿಗೆ ಹೇಗೆ ಪ್ರೇರಕ ಎಂಬುದನ್ನು
ತಿಳಿಸಿದರು. ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯ್ರಾದ ಪಿ ಕೆ ಪರಮೇಶ್ವರ್ ಭಟ್ ಅತಿಥಿಯಾಗಿ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶು ಪಾಲರಾದ ಸೀತಾರಾಮ ಕೇವಳ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯದರ್ಶಿ ಧಿರಾಜ್ ಎನ್ ರೈ ಸ್ವಾಗತಿಸಿ ಕನ್ನಡ ಸಂಘ ಕಾರ್ಯದರ್ಶಿ ಶ್ರೀಕಾಂತ್ ಎಚ್ ಡಿ ವಂದಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು . ಭಾವಿತ್ ಕೆ ಪಿ ಮತ್ತು ಶ್ಯಾಮ್ ಪ್ರಾರ್ಥಿಸಿದರು. ಅಸ್ವಿತ ಎಚ್ ಎಸ್, ವಿಧ್ಯಾಲಕ್ಷ್ಮಿ ಭೂಮಿಕಾ, ಫತಿಮತ್ ರಜಿಯಾ ಶರತ್ ಶ್ರೀಕಾಂತ್ ಎಚ್ ಡಿ, ಭಾವಿತ್ ಕೆ ಪಿ, ಪ್ರಮಿತ್ ರಾಜ್ ,ಯಶವಂತ್ ಬಿ ಯು, ಶ್ಯಾಮ ನಾಸಿರ್ ಎಸ್,ಧಿರಾಜ್ ಎನ್ ರೈ ಕಾರ್ಯಗಾರದಲ್ಲಿ ಭಾಗವಹಿಸಿದ್ದಾರೆ.