Saturday, January 31, 2009


ಇಂಡಸ್ ಕಾಲೇಜಿನಲ್ಲಿ ಚುಟುಕು ಕಾರ್ಯಾಗಾರ

ಕನ್ನಡ ಸಂಘ , ರಾಷ್ಟ್ರೀಯ ಸೇವಾ ಯೋಜನೆ ಇಂಡಸ್ ಕಾಲೇಜು ಮತ್ತು ಪುತ್ತೂರು ತಾಲೂಕು ಚುಕ್ತುಕು ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗೆ ಒಂದು ದಿನದ ಚುಟುಕು ಕಾರ್ಯಾಗಾರ ಇಂಡಸ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚುಟುಕ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಶ್ರೀ ವಿ ಬಿ ಅರ್ತಿಕಜೆಯವರು ಉಧ್ಘಾಟಿಸಿದರು . ಅವರು ಮಾತನಾಡುತ್ತ ಚುಟುಕು ನಮ್ಮ ಬದುಕಿಗೆ ಹೇಗೆ ಪ್ರೇರಕ ಎಂಬುದನ್ನು
ತಿಳಿಸಿದರು. ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯ್ರಾದ ಪಿ ಕೆ ಪರಮೇಶ್ವರ್ ಭಟ್ ಅತಿಥಿಯಾಗಿ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶು ಪಾಲರಾದ ಸೀತಾರಾಮ ಕೇವಳ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯದರ್ಶಿ ಧಿರಾಜ್ ಎನ್ ರೈ ಸ್ವಾಗತಿಸಿ ಕನ್ನಡ ಸಂಘ ಕಾರ್ಯದರ್ಶಿ ಶ್ರೀಕಾಂತ್ ಎಚ್ ಡಿ ವಂದಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು . ಭಾವಿತ್ ಕೆ ಪಿ ಮತ್ತು ಶ್ಯಾಮ್ ಪ್ರಾರ್ಥಿಸಿದರು. ಅಸ್ವಿತ ಎಚ್ ಎಸ್, ವಿಧ್ಯಾಲಕ್ಷ್ಮಿ ಭೂಮಿಕಾ, ಫತಿಮತ್ ರಜಿಯಾ ಶರತ್ ಶ್ರೀಕಾಂತ್ ಎಚ್ ಡಿ, ಭಾವಿತ್ ಕೆ ಪಿ, ಪ್ರಮಿತ್ ರಾಜ್ ,ಯಶವಂತ್ ಬಿ ಯು, ಶ್ಯಾಮ ನಾಸಿರ್ ಎಸ್,ಧಿರಾಜ್ ಎನ್ ರೈ ಕಾರ್ಯಗಾರದಲ್ಲಿ ಭಾಗವಹಿಸಿದ್ದಾರೆ.

No comments: