Wednesday, October 22, 2008

ಹಳ್ಳಿಗಳು ಖಾಲಿಯಾಗುತ್ತಿವೆ.

ಮೇಲಿನ ತಲೆಬರಹದಲ್ಲಿ ೧೯-೧೦-೨೦೦೮ ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ನರೇಂದ್ರ ರೈ ದೇರ್ಲ ಬರೆದಿರುವ ಲೇಖನ ಉತ್ತಮವಿಚಾರಗಳನ್ನು ತೆರೆದಿಟ್ಟಿದೆ. ನಗರ ವ್ಯಾಮೋಹ ಎಲ್ಲಿಯವರೆಗೆ ನಮ್ಮನ್ನು ಬಿದುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹಳ್ಳಿಗಳು ಖಾಲಿಯಾಗುತ್ತಲೇ ಇರುತ್ತವೆ. ಒಂದು ಹಂತದಲ್ಲಿ ನಾವೆಲ್ಲ ಮೇಲೆ ನೋಡ ಬೇಕಾದ ಪರಿಸ್ಥಿತಿ ಬರಬಹುದು. ಹಾಗಾದರೆ ಅದನ್ನು ನಿಲ್ಲಿಸುವ ದಾರಿ ಯಾವುದು? ಯಾವುದೇ ಸರಕಾರ ರೈತರಿಗಾಗಿ ವಿವಿಧ ಪ್ಯಾಕೇಜು ಘೋಷಿಸುವಾಗ ಕೆಲವೊಂದು ವಿಚಾರಗಳನ್ನು ಗಮನಿಸ ಬೇಕಾಗಿವೆ. ಯಾವತ್ತು ರೈತನ ಕೆಲಸ ಬಹಳ ಮುಖ್ಯ ಎನ್ನುವ ವಿಚಾರ ನಮ್ಮ ಯುವಜನರಿಗೆ ಬರುವಹಾಗೆ ಮಾಡಿದ್ದಾರೆಯೇ? ಕೃಷಿ ಕ್ಷೇತ್ರದಲ್ಲಿ ಯುವಕರನ್ನು ಆಕರ್ಷಿಸಲು ಸರಕಾರದಲ್ಲಿ ಅಥವಾ ಚಿಂತಕರಲ್ಲಿ ಏನಾದರು ವಿಶೇಷ ದಾರಿಗಳಿವೆಯೇ? ಅಥವಾ ಕನಿಷ್ಠ ಉತ್ತಮ ಯುವ ಕೃಷಿಕ ಎನ್ನುವ ಪ್ರಶಸ್ತಿ ಕೊಡುತ್ತಾರೆಯೇ? ಕೃಷಿಕರ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತಿದೆಯೇ? ಇನ್ನಾದರು ಇದೊಂದು ಗಂಭೀರ ಪ್ರಶ್ನೆ ಎನ್ನುವ ಮನೋಭಾವ ನಮ್ಮ ಆಡಳಿತ ಪ್ರತಿನಿಧಿಗಳಿಗೆ ಬರಬಹುದೇ?

Sunday, October 19, 2008

ಕಾಸರಗೋಡು ಸುದ್ದಿಗಳು

ಕನ್ನಡಿಗರ ಹೋರಾಟ : ಕಾಸರಗೋಡು ಪ್ರದೇಶದಲ್ಲಿ ಕನ್ನಡ ಭಾಷೆಯ ಮೇಲೆ ವ್ಯಾಪಕ ಮಲತಾಯಿ ಧೋರಣೆ ಆಗುತ್ತಿರುವುದರ ಕುರಿತು ಕಾಸರಗೋಡು ಕನ್ನಡಿಗರು ಕಣ್ಣೀರು ಮಿಡಿಯುತ್ತಿದಾರೆ. ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಚಟುವಟಿಕೆಗಳನ್ನು ಸಹಿಸದ ಕೆಲವು ಮಂದಿ ಸೂಚನಾ ಫಲಕವನ್ನು ಹರಿಯುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಯುವಕರೇ ನಾವೇನು ಮಾಡಬಹುದು

ಪ್ರಪಂಚ ವಿಶಾಲವಾಗಿದೆ. ಜಾಗತೀಕರಣದ ಮಧ್ಯೆಯೂ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಈ ಸಮಸ್ಯೆ ಯನ್ನು ಪರಿಹರಿಸಲು ಯುವಕರಾದ ನಾವು ಬಹಳಷ್ಟು ಪ್ರಯತ್ನಿಸಬೇಕಾಗಿದೆ. ಈಗ ಯಾರಿಗೂ ಅರಿವಿನ ಕೊರತೆ ಇಲ್ಲ. ಆದರೆ ನಾವೇನು ಮಾಡುತ್ತಿದ್ದೇವೆ ಎನ್ನುವ ವಿವೇಕ ನಮಲ್ಲಿ ಇಲ್ಲ. ಆದುದರಿಂದ ಪ್ರಪಂಚ ಬೆಳೆಯುತ್ತಿರುವಂತೆ ನಾವ್ಯಾಕೆ ಹಿಂದೆ ಚಲಿಸುತ್ತಿದ್ದೇವೆ
ಎಂದು ಅರ್ಥವಾಗುತ್ತಿಲ್ಲ. ಇದನ್ನು ಪರಿಹರಿಸಲು ಯುವಕರಿಂದ ಮಾತ್ರ ಸಾಧ್ಯ. ನಾವೇನಾದರೂ ಈಗ ಪ್ರಯತ್ನ ಮಾಡದಿದ್ದರೆ ಮುಂದೆ ನಾವೇ ದುರಂತವನ್ನು ನಮ್ಮ ಮೇಲೆಯೇ ಎಳೆದುಹಾಕಿದಂತೆ . ಈ ಸಮಸ್ಯೆ ಭೀಕರವಾಗುವ ಮೊದಲು ನಾವೇನು ಮಾಡಬಹುದು?ಪ್ರತಿಯೊಬ್ಬರೂ ನಮ್ಮ ಪರಿಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಾಗಿದೆ. ತನ್ನ ಹಿನ್ನೆಲೆಯನ್ನು ಅರಿಯಬೇಕಾಗಿದೆ. ಹೀಗಾದರೆ ಮಾತ್ರ ನಾವೇನಾದರೂ ಈ ಸಮಾಜಕ್ಕೆ ಕೊಡುಗೆಯನ್ನು ಕೊಡಬಹುದಾಗಿದೆ. ಈ ಸುಂದರವಾದ ಭೂಮಿಯಲ್ಲಿ ನಾವು ಹುಟ್ಟಿ ನಮ್ಮ ದೇನಾದರು ಕೊಡುಗೆಯನ್ನು ಕೊಡದಿದ್ದರೆ ನಮ್ಮ ಜೀವನವೇ ಶೂನ್ಯವಾಗಬಹುದು. ನಮಗೀಗ ಬೇಕಾಗಿರುವುದು ಏನು? ಯಾವುದರ ಕೊರತೆಯಿಂದ ನಮಗೆ ಈಗ ಗೊಂದಲವಾಗಿದೆ. ಈ ಗೊಂದಲಕ್ಕೆ ಪರಿಹಾರವೇನು? ಅಭಿಪ್ರಾಯ ತಿಳಿಸುತ್ತಿರಾ?

ರಾಜೇಶ್ ಬೆಜ್ಜಂಗಳ