Saturday, February 12, 2011

ಕಾರಂತರ ಕಾದಂಬರಿಗಳ ಮರು ಓದು.


ಶಿವರಾಮ ಕಾರಂತ ಬಾಲವನ ಸಮಿತಿ ,ಅನಿಕೇತನ ಎಜುಕೇಶನ್ ಟ್ರಸ್ಟ್ , ಕನ್ನಡ ಸಂಘ ಇನ್ದುಸ್ ಕಾಲೇಜು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬಾಲವನದಲ್ಲಿ ಕಾರಂತರ ಕಾದಂಬರಿಗಳ ಮರು ಓದು ಎಂಬ ಒಂದು ದಿನದ ವಿಚಾರ ಸಂಕಿರಣವು ಜರಗಿತು. ಕಾರ್ಯಕ್ರಮವನ್ನು ಮಂಗಳೂರು ವಿವಿ ಉಪಕುಲಸಚಿವರಾದ ಪ್ರಭಾಕರ ನೀರ್ ಮಾರ್ಗ ಉದ್ಘಾಟಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸವಣೂರು ಸೀತಾರಾಮ ರೈ ಯವರು ವಹಿಸಿದ್ದರು. ವಿಕಾಸದ ಅದ್ಯಕ್ಷರಾದ ಕೃಷ್ಣ ಮೂರ್ತಿ ಮುಖ್ಯ ಅತಿಥಿ ಯಾಗಿದ್ದರು. ಅನಿಕೇತನ ಎಜುಕೇಶನ್ ಟ್ರಸ್ಟ್ ನ ಕೃಷ್ಣ ಪ್ರಸಾದ್ ನಡ್ಸಾರ್ ಸ್ವಾಗತಿಸಿ , ಇಂಡಸ್ ಕಾಲೇಜು ಪ್ರಾಂಶು ಪಾಲರಾದ ಸೀತಾರಾಮ ಕೇವಳ ವಂದಿಸಿದರು. ಬಳಿಕ ನಡೆದ ವಿಚಾರಸಂಕಿರಣದಲ್ಲಿ ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಕನ್ನಡ ಉಪನ್ಯಾಸಕರಾದ ರಮೇಶ್ ಭಟ್ ಚೋಮನ ದುಡಿ ಕಾದಂಬರಿಯ ಕುರಿತು ಹಾಗು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ನವೀನ್ ಕುಮಾರ್ ಮರಿಕೆ ಯವರು ಬೆಟ್ಟದ ಜೀವ ಕಾದಂಬರಿಯ ಕುರಿತು ವಿಚಾರ ಮಂಡಿಸಿದರು . ನಿವೃತ್ತ ಪ್ರಾಧ್ಯಾಪಕರಾದ ಹರಿನಾರಾಯಣ್ ಮಾಡಾವು ಸಮನ್ವಯಕಾರರಾಗಿದ್ದರು. ರಂಗಕರ್ಮಿ ಇ ಕೆ ಬೊಳುವಾರು , ಪ್ರಭಾಕರ್, ಬಿಜೆ ಸುವರ್ಣ , ಪರಮೇಶ್ವರ ಭಟ್ ಸಂವಾದದಲ್ಲಿ ಭಾಗವಹಿಸಿದರು. ಕನ್ನಡ ಉಪನ್ಯಾಸಕ ರಾಜೇಶ್ ಬೆಜ್ಜಂಗಳ ಗೋಷ್ಠಿಯನ್ನು ನಿರ್ವಹಿಸಿದರು.

No comments: